ಒಂದು ಕಾಲದಲ್ಲಿ ಬಿ.ಜೆ.ಪಿ ಅಂದ್ರೆ ಜನಾರ್ಧನ್ ರೆಡ್ಡಿ ಶ್ರೀರಾಮುಲು ಅನ್ನೋತರಾ ಇತ್ತು. ತಮ್ಮದೇ ಆದ ಸಾಮ್ರಾಜ್ಯವನ್ನ ಕಟ್ಟಿಕೊಂಡು ಆಳ್ವಿಕೆ ಮಾಡ್ತಿದ್ರು ಆದ್ರೆ ಜನಾರ್ಧನ್ ರೆಡ್ಡಿ ಅದೃಷ್ಟ ಸರಿ ಇಲ್ಲದ ಕಾರಣ ಅವ್ರು ಜೈಲು ಸೇರಿಬಿಟ್ರು ಆದ್ರೆ ಜೈಲಲ್ಲಿ ಸುಮ್ನೆ ಅಂತು ಕೂರಲಿಲ್ಲ ಏನ್ ಮಾಡಿದ್ರು ಅಂತ ಗೊತ್ತಾ ಇಲ್ಲಿದೆ ನೋಡಿ ಡೀಟೇಲ್ಸ್...
ಜೈಲಲ್ಲಿ ಇದ್ರೂ ಕೂಡ ಇಡೀ ರಾಜ್ಯವನ್ನ ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಅನ್ನೋ ಪ್ಲ್ಯಾನ್ ಅವತ್ತೇ ಮಾಡಿದ್ರು ಆವಾಗ್ಲೇ ಶ್ರೀರಾಮುಲು ಅವರನ್ನು ಮುಖ್ಯಮಂತ್ರಿ ಮಾಡ್ಬೇಕು ಅಂತ ತೀರ್ಮಾನ ಕೂಡ ಮಾಡಿದ್ರು ಅಂದಿನಿಂದಲೇ ಅದಕ್ಕೆ ಬೇಕಾದ ರೂಪುರೇಷೆಗಳನ್ನ ತಯಾರುಮಾಡತೊಡಗಿದ್ರು
ಜನಾರ್ಧನ್ ರೆಡ್ಡಿ ಅವರ ಪ್ಲ್ಯಾನ್ ನಂತೆ 2016 ರಲ್ಲಿ ಶ್ರೀರಾಮುಲು ಅವರು ಒಂದು ಸಮಾರಂಭಕ್ಕ ಹೋದಾಗ ನೇರವಾಗಿ ನಾನೇ ಮುಂದಿನ DCM ಅಂತ ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟಿದ್ರು. ಈ ಹೇಳಿಕೆಯ ಹಿಂದೆ ಜನಾರ್ಧನ್ ರೆಡ್ಡಿಯವರ ಚಾಣಾಕ್ಷತನ ಇತ್ತು. ಆದ್ರೆ ಆ ಸಮಯದಲ್ಲಿ ಬಿ.ಜೆ.ಪಿ ಯಲ್ಲಿ ಕೆಲವು ಗೊಂದಲ ಸೃಷ್ಟಿಯಾಗಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಆದ್ರೆ ಈ ಸಲ ಮಾತ್ರ ಬಿ.ಜೆ.ಪಿ ಗೆದ್ದರೆ DCM ಆಗೋದಂತೂ ಶ್ರೀರಾಮುಲೂ ಅವರೇ. ಶ್ರೀರಾಮುಲು ಮುಂದೆ DCM ಆಗಿ CM ಆಗೋವರೆಗೂ ತಮ್ಮ ಛಲವನ್ನ ಬೀಡೋದಿಲ್ಲ ಅಂತ ಪಣತೊಟ್ಟಿದ್ದಾರೆ ಜನಾರ್ಧನ್ ರೆಡ್ಡಿ.
