Share This Article To your Friends

ನಿಮಗೆ ಗೊತ್ತಿಲ್ಲದ ಹೋರಾಟಗಾರರ ಬದುಕು



INDIPENDANCE DAY-15-08-1947

ಜೀವ ಕೊಟ್ಟಿದ್ದು ನಿಮಗಾಗಿ (ಹೆಡ್​)
=============================-
ಸುಭಾಷ್ಚಂದ್ರಬೋಸ್
============================-
ಒಂದ್ಸೊಲ ವಿಶ್ವದ ಅಧ್ಯಕ್ಷರೆಲ್ಲರೂ ಸಾಲಾಗಿನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.. ಆಗ ಸುಭಾಷ್ ಚಂದ್ರ ಬೋಸರು ಅವರ ಜೊತೆ ನಿಲ್ಲಲಿಲ್ಲ.. ದೂರ ನಿಂತ ಸುಭಾಷ್​​ಚಂದ್ರಬೋಸರನ್ನು ನೋಡಿ, ಅಧ್ಯಕ್ಷರೊಬ್ಬರು ಅವರನ್ನು ಕರೆದು
ಗ್ರಾಫಿಕ್ - ‘ಬನ್ನಿ.. ನೀವು ನಮ್ಮೊಂದಿಗೆ ನಿಂತುಕೊಂಡು ಫೋಟೋ ತೆಗೆಸಿಕೊಳ್ಳಿ.. ಮುಜುಗರ ಪಡಬೇಡಿ
ವಾಯ್ಸ್:  ಅಂತ ಹೇಳಿದ್ರಂತೆ.. ಆಗ ಸುಭಾಷ್ ಚಂದ್ರಬೋಸ್ ಏನ್ ಹೇಳಿದ್ರು ಗೊತ್ತಾ..?
ಗ್ರಾಫಿಕ್ - ‘ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳೋದಕ್ಕೆ ನನ್ನ ಅಭ್ಯಂತರವಿಲ್ಲ.. ಆದರೆ ನನ್ನೊಂದಿಗೆ ಸರಿಸಮನಾಗಿ ನಿಲ್ಲುವ ಅರ್ಹತೆ ನಿಮ್ಮಲ್ಲಿ ಯಾರಿಗೂ ಇಲ್ಲ.. ಅದಿಕ್ಕೆ ನಾನು ದೂರ ನಿಂತಿದ್ದೀನಿ
ವಾಯ್ಸ್:  ಅಂತ ಗರ್ವದಿಂದ ಹೇಳಿದ್ರಂತೆ.. ಇದು ಸುಭಾಷ್​ಚಂದ್ರಬೋಸರ ದಿಟ್ಟ ಸ್ವಾಭಿಮಾನವನ್ನು ತೋರಿಸುತ್ತೆ


=======================-
ಸುಭಾಷ್ಚಂದ್ರಬೋಸ್
===========================-
ಭಾರತ ಮತ್ತು ಪಾಕಿಸ್ತಾನ ವಿಭಜಿತವಾದಾಗ ಪಾಕಿಸ್ತಾನದ ಮೊಹಮದ್ ಅಲಿ ಜಿನ್ನ ಹೇಳಿದ ಮಾತಿದು.
ಗ್ರಾಫಿಕ್ - ‘ನಾನು ಮಹಾತ್ಮಾ ಗಾಂಧೀಜಿಯವರ ಜೊತೆ ಮಾತುಕತೆ ನಡೆಸಿದ್ದಕ್ಕೆ, ನನಗೆ ಪಾಕಿಸ್ತಾನ ಸಿಕ್ಕಿತು.. ಗಾಂಧೀಜಿಯವರ ಬದಲು ನಾನೇನಾದ್ರೂ ಸುಭಾಷ್ ಚಂದ್ರಬೋಸರೊಂದಿಗೆ ಮಾತುಕತೆಯನ್ನು ನಡೆಸಿದ್ದಿದ್ರೆ ನಮಗೆ ಪಾಕಿಸ್ತಾನ ದಕ್ಕುತ್ತಿರಲಿಲ್ಲ’ - ಮೊಹಮದ್ ಅಲಿ ಜಿನ್ನಾ
=================================================-
ಸುಭಾಷ್ ಚಂದ್ರಬೋಸ್
ಸುಭಾಷ್​ಚಂದ್ರಬೋಸರು 1945ರಲ್ಲಿ ವಿಮಾನ ಅಪಘಾತದಲ್ಲಿ ಹುತಾತ್ಮರಾದರು ಅನ್ನೋ ಸುದ್ದಿ, ಬ್ರಿಟೀಷರ ಕಿವಿಗೆ ಬಿದ್ದಿತು.. ಇದನ್ನು ಕೇಳಿದ ಬ್ರಿಟೀಷ್ ಅಧಿಕಾರಿಯೊಬ್ಬರು,
ಗ್ರಾಫಿಕ್ - ‘ಸುಭಾಷ್ ಚಂದ್ರಬೋಸರು, ಅಷ್ಟು ಸುಲಭವಾಗಿ ಹುತಾತ್ಮರಾಗುವಂಥ ವ್ಯಕ್ತಿಯಲ್ಲ.. ಯಾವ ಸಮಯದಲ್ಲಿ ಎಲ್ಲಿಂದ ಎದ್ದು ಬರ್ತಾರೋ ಗೊತ್ತಾಗೋದಿಲ್ಲ’ - ಬ್ರಿಟೀಷ್ ಅಧಿಕಾರಿ
ವಾಯ್ಸ್: ಅಂತ ಬ್ರಿಟೀಷ್ ಅಧಿಕಾರಿಯೊಬ್ಬರು ಹೇಳಿದ್ರಂತೆ.
===========================================-
ಸುಭಾಷ್​ ಚಂದ್ರಬೋಸ್​
==============================-
ಆಗಸ್ಟ್​​ 18, 1945 ರಲ್ಲಿ ಸುಭಾಷ್ ಚಂದ್ರಬೋಸರು ವಿಮಾನ ಅಪಘಾತದಲ್ಲಿ ಹುತಾತ್ಮರಾಗಿದ್ದರೂ ಕೂಡ,
ಗ್ರಾಫಿಕ್ - ‘ಸುಭಾಷ್ ಚಂದ್ರಬೋಸರು ತಮ್ಮ ಮೇಲೆ ಧಾಳಿ ಮಾಡಬಹುದು ಎಂಬ ಆತಂಕದಲ್ಲೇ ಬ್ರಿಟೀಷ್ಅಧಿಕಾರಿಗಳು ಬಹಳಷ್ಟು ದಿನ ಕಾಲ ಕಳೆದಿದ್ದರು
ವಾಯ್ಸ್: ಇದು ಸುಭಾಷ್ ​ಚಂದ್ರಬೋಸರ ಬಗ್ಗೆ ಬ್ರಿಟೀಷರಿಗಿದ್ದ ಭಯವನ್ನು ತೋರಿಸುತ್ತೆ.
=========================================================-
ಭಗತ್​ಸಿಂಗ್​​

ಗ್ರಾಫಿಕ್ ಇನ್
==================-
ದಿನಾಂಕ : 1919 ಏಪ್ರಿಲ್ 13
ಸಮಯ : ಸಂಜೆ 6 ಗಂಟೆ
ಸ್ಥಳ : ಪಂಜಾಬ್​​ನ ಜಲಿಯನ್ ವಾಲಾಬಾಗ್
ವಿಶ್ಯುಯಲ್ ಫ್ಲೋ...
ಬ್ರಿಟೀಷರ ವಿರುದ್ಧ 20.000 ರೈತರು ಹೋರಾಟ ನಡೆಸುತ್ತಿದ್ದರು.. ಆದ್ರೆ, ಹೋರಾಟ ನಿರತ ರೈತರ ಮೇಲೆ ಬ್ರಿಟೀಷರು  ಯಾವುದೇ ಮುನ್ಸೂಚನೆ ಇಲ್ಲದೇ ನಿರ್ದಯವಾಗಿ ಗುಂಡು ಹಾರಿಸಿದ್ರು.. ಕೇವಲ 6 ನಿಮಿಷಗಳಲ್ಲಿ ಸುಮಾರು 3000 ಕ್ಕೂ ಹೆಚ್ಚಿನ ಜನರು ಕ್ಷಣಮಾತ್ರದಲ್ಲಿ ಪ್ರಾಣ ಕಳೆದುಕೊಂಡರು.. ಪುಟ್ಟ ಹುಡುಗನಾಗಿದ್ದ ಭಗತ್ ಸಿಂಗ್ ಆ ಘನ ಘೋರ ಹತ್ಯಾಕಾಂಡಕ್ಕೆ ಮೂಕ ಸಾಕ್ಷಿಯಾಗಿದ್ರು..!

ಮಾರನೆಯ ದಿನ ಶಾಲೆಗೆ ಹೋಗು ಅಂತ ಊಟದ ಬುತ್ತಿಯನ್ನು ನೀಡಿ ಕಳಿಸಿದ್ರೆ ಭಗತ್ ಸಿಂಗ್ ನೇರವಾಗಿ ಹತ್ಯಾಕಾಂಡದ ಕರಾಳ ಪ್ರದೇಶಕ್ಕೆ ಬಂದು, ಆ ನೆಲದಲ್ಲಿ ಬಿದ್ದ ರಕ್ತಸಿಕ್ತ ಮಣ್ಣನ್ನು ನೋಡಿ ಕೆಂಡಾಮಂಡಲವಾದ್ರು. ತನ್ನ ಊಟವನ್ನು ನೆಲದಲ್ಲಿ ಚೆಲ್ಲಿದರು.. ಆ ರಕ್ತಸಿಕ್ತ ಮಣ್ಣನ್ನು ಆ ಊಟದ ಡಬ್ಬದಲ್ಲಿ ಹಾಕಿಕೊಂಡು ಮನೆಗೆ ಬಂದು ದೇವರ ಮುಂದಿಟ್ಟು

ಗ್ರಾಫಿಕ್ - ‘ನನ್ನ ದೇಶದ ಜನರ ರಕ್ತವನ್ನು ಹರಿಸಿದವರನ್ನು ನಾನು ಸುಮ್ಮನೇ ಬಿಡೋದಿಲ್ಲ. ಅವರ  ಜೀವ ತೆಗೆಯುವವರೆಗೂ  ನನಗೆ ಸಮಾಧಾನವಿಲ್ಲ

ವಾಯ್ಸ್: ಅಂತ ಪ್ರತಿಜ್ಞೆ ಮಾಡಿದ್ರು.. ಆ ಕ್ಷಣದಿಂದಲೇ ಬ್ರಿಟೀಷರ ಮೇಲೆ ಯುದ್ಧ ಸಾರಿದರು
===============================================-
ಭಗತ್​ ಸಿಂಗ್​​

ದಿನಾಂಕ : ಮಾರ್ಚ್​ 23, 1931
ಸ್ಥಳ : ಲಾಹೋರ್ ಜೈಲ್​

ವಾಯ್ಸ್: ಭಗತ್​ಸಿಂಗ್​ರನ್ನು ಆವತ್ತು ನೇಣುಗಂಬಕ್ಕೆ ಏರಿಸುವ ಎಲ್ಲಾ ತಯಾರಿ ನಡೀತಿತ್ತು. ಭಗತ್ ಸಿಂಗ್‌ರನ್ನು ನೋಡಿದ ಬ್ರಿಟೀಷ್ ಅಧಿಕಾರಿಯೊಬ್ಬ
ಗ್ರಾಫಿಕ್ - ‘ನೀನು ಈ ಜನರಿಗಾಗಿ ಕಷ್ಟ ಪಟ್ಟೆ.. ಆದರೆ ಇಂದು ನಿನ್ನನ್ನು ನೇಣುಹಾಕುತ್ತಿದ್ದರೂ, ಇವರೆಲ್ಲಾ ಸುಮ್ಮನೇ ನೋಡುತ್ತಿದ್ದಾರೆ. ಯಾರೂ ನಿನ್ನನ್ನು ರಕ್ಷಿಸುತ್ತಿಲ್ಲ.. ಇಂಥವರಿಗಾಗಿ ನೀನು ಹೋರಾಟ ಮಾಡ್ತಿದ್ದೀಯಲ್ಲ.. ನೀನು ಸತ್ತರೆ ಮತ್ಯಾರು ಹೋರಾಟ ಮಾಡ್ತಾರೆ

ವಾಯ್ಸ್: ಅಂತ ಕೇಳಿದ್ರಂತೆ.. ಆಗ ಭಗತ್ ಸಿಂಗ್ ಏನ್ ಹೇಳಿದ್ರು ಗೊತ್ತಾ..?
ಗ್ರಾಫಿಕ್- ‘ನಾನು ಸತ್ತರೆ ನನ್ನಂಥ ನೂರಾರು ಭಗತ್ ಸಿಂಗ್​​ರು ನನ್ನ ತಾಯಿ ನೆಲದಲ್ಲಿ ಹುಟ್ಟುತ್ತಾರೆ.. ಅಂಥ ಶಕ್ತಿ ನನ್ನ ತಾಯಿ ಭಾರತ ಮಾತೆಗೆ ಇದೆ
ವಾಯ್ಸ್ : ಅಂತ  ಹೇಳುತ್ತಾ ನಗು ನಗುತ್ತಲೇ ನೇಣುಗಂಬಕ್ಕೆ ತಲೆ ನೀಡಿದರು.. ಅಂದು ಭಾರತದ ಆಶಾಕಿರಣ ಕಣ್ಮರೆಯಾಗಿಹೋಯ್ತು.
=======================================-
ಮಹಾತ್ಮಾ ಗಾಂಧೀಜಿ
=======================-
ಗ್ರಾಫಿಕ್ - ಸ್ವತಂತ್ರ್ಯ ಹೋರಾಟ ಎಂದರೆ, ಯುದ್ಧ, ರಕ್ತಪಾತ, ಶಸ್ತ್ರಾಸ್ತ್ರ ಸಜ್ಜಿತ ದಾಳಿ ಅಂತ ಇಡೀ ಜಗತ್ತೇ ಅಂದುಕೊಂಡಿತ್ತು.. ಆದ್ರೆ ಹಿಂಸೆ, ರಕ್ತಪಾತ ಇಲ್ಲದೇ, ಅಹಿಂಸಾತ್ಮಕವಾಗಿ ಸ್ವತಂತ್ರ್ಯ ಹೋರಾಟ ಮಾಡಬಹುದು ಎಂದು ಇಡೀ ಜಗತ್ತಿಗೆ ಅಹಿಂಸೆಯ ಪಾಠ ಹೇಳಿಕೊಟ್ಟಿದ್ದು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ.
ಗ್ರಾಫಿಕ್ - ಮಹಾತ್ಮಾ ಗಾಂಧಿಜೀಯವರ ಹಾದಿ ತುಳಿದು, ಅಹಿಂಸೆಯಿಂದ ದಕ್ಷಿಣ ಆಫ್ರಿಕಾಗೆ ಸ್ವತಂತ್ರ ತಂದುಕೊಟ್ಟವರು, ಆಫ್ರಿಕನ್ ಗಾಂಧಿ ನೆಲ್ಸನ್ ಮಂಡೇಲ
==============================================-
ಮಹಾತ್ಮಾ ಗಾಂಧೀಜಿ
===========================-
ಗಾಂಧೀಜಿಯವರು ಅಹಿಂಸೆಯನ್ನು ಅಳವಡಿಸಿಕೊಂಡಿದ್ದರು.. ಹೀಗಾಗಿ ಅನೇಕ ಕ್ರಿಶ್ಚಿಯನ್ ಮಿತ್ರರು
ಗ್ರಾಫಿಕ್ - ‘ನಿಮ್ಮಲ್ಲಿ ಕ್ರಿಶ್ಚಿಯನ್​​ ಧರ್ಮದ ಅನೇಕ ಉತ್ತಮ ಆದರ್ಶ ಗುಣಗಳಿವೆ. ನೀವು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿ
ವಾಯ್ಸ್:  ಎಂದು ಗಾಂಧೀಜೀ ಯವರನ್ನು ಒತ್ತಾಯಿಸಿದರಂತೆ. ಆಗ ಗಾಂಧೀಜೀಯವರು
ಗ್ರಾಫಿಕ್ - ‘ಈಗಿರುವ ಹಿಂದೂಧರ್ಮದಲ್ಲಿ ಏನಾದರೂ ಕೊರತೆ ಇದೆಯೇ..? ಕೊರತೆ ಇದ್ದರೆ, ಹೇಳಿ, ಆಗ ನಾನು ಧರ್ಮ ಬದಲಿಸುತ್ತೇನೆ
ವಾಯ್ಸ್: ಎಂದು ಹೇಳಿದರಂತೆ.
ಗ್ರಾಫಿಕ್ - ‘ಎಲ್ಲಾ ಧರ್ಮಗಳಲ್ಲಿನ ಉತ್ತಮ ತತ್ವಗಳನ್ನು ಮತ್ತು ನೀತಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ ಅದಕ್ಕಾಗಿ ಧರ್ಮವನ್ನೇ ಬದಲಾಯಿಸಬೇಕೆಂಬ ಭಾವನೆ ಸರಿಯಲ್ಲ
ವಾಯ್ಸ್: ಎಂಬುದು ಗಾಂಧೀಜಿಯವರ ನಿಲುವು
=====================================--
ಮಹಾತ್ಮಾ ಗಾಂಧೀಜಿ
===========================-
ವಿಶ್ಯುಯಲ್ ಫ್ಲೋ...
ಒಮ್ಮೆ ಗಾಂಧೀಜಿಯವರ ಬಳಿಗೆ ಮಹಿಳೆ ಬಂದು, ಬಾಪುಜಿ ನನ್ನ ಮಗಳು ಬೆಲ್ಲವನ್ನು ಹೆಚ್ಚಾಗಿ ತಿಂತ್ತಾಳೆ. ನೀವು ಬುದ್ದಿ ಹೇಳಿ, ಬೆಲ್ಲ ತಿನ್ನುವುದನ್ನು ನಿಲ್ಲಿಸುಸಿ ಅಂತ ಕೇಳಿಕೊಂಡರಂತೆ. ಆಗ ಸ್ವಲ್ಪ ಯೋಚನೆ ಮಾಡಿದ ಮಹಾತ್ಮಾ ಗಾಂಧೀಜಿ "ನೀವು ಒಂದು ವಾರದ ನಂತರ ನಿಮ್ಮ ಮಗುವನ್ನು ಕರೆದುಕೊಂಡು ಬನ್ನಿ ನೋಡೋಣ" ಎಂದು ಹೇಳಿ ಕಳಿಸಿದರು

ಒಂದು ವಾರದ ನಂತರ ಆ ಮಹಿಳೆ ಮತ್ತೆ ಮಹಾತ್ಮಾ ಗಾಂಧಿಯವರ ಬಳಿಗೆ ಬಂದು, ‘ಬಾಪುಜಿ. ನೀವು ಹೇಳಿದಂತೆ ಒಂದು ವಾರದ ನಂತರ ಬಂದಿದ್ದೇನೆ. ಏನಾದರೂ ಪರಿಹಾರ ಹೇಳಿ ಎಂದು ಕೇಳಿದರಂತೆ.

ಗ್ರಾಫಿಕ್ - ‘ನಿಮ್ಮ ಮಗುವಿಗೆ ಬುದ್ಧಿ ಹೇಳಲು ನನಗೆ ಸಾಧ್ಯವಿಲ್ಲ. ನೀವು ಬಂದು ಹೋದ ದಿನದಿಂದ ನಾನು ಬೆಲ್ಲ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡೆ. ಒಮ್ಮೆ ಅಭ್ಯಾಸವಾದ ಮೇಲೆ ಅದನ್ನು ಹೇಗೆ ಬಿಡುವುದು ಎಂದು ಆಲೋಚಿಸಿ ಪ್ರಯತ್ನ ಕೂಡ ಮಾಡಿದೆ. ಆದ್ರೆ ಬೆಲ್ಲ ತಿನ್ನುವುದನ್ನು ಬಿಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನೇ ಬೆಲ್ಲ ತಿನ್ನುವುದನ್ನು ಬಿಡಲು ಸಾಧ್ಯವಾಗದೇ ಇರುವಾಗ, ನಾನು ಆ ಮಗುವಿಗೆ ಹೇಗೆ ಬುದ್ದಿ ಹೇಳಲಿ?’
ವಾಯ್ಸ್:  ಎಂದರಂತೆ ಗಾಂಧೀಜಿ
============================================-
ಮಹಾತ್ಮ ಗಾಂಧೀಜಿ
=====================-
ಗ್ರಾಫಿಕ್ - ‘ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಗಾಂಧೀಜಿ ತಮ್ಮ ತಾಯಿಗೆ ಪ್ರಮಾಣ ಮಾಡಿದರು. ಆದರೆ ಕಾನೂನು ಓದುವುದಕ್ಕಾಗಿ ಗಾಂಧೀಜಿಯವರು ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಹೋದರು. ಆದ್ರೆ ವಿದೇಶದಲ್ಲಿ ಮಾಂಸಾಹಾರವೇ ಹೆಚ್ಚು ಪ್ರಸ್ತುತ. ಲಂಡನ್‌ನಲ್ಲಿ ಸಸ್ಯಾಹಾರ ಸಿಗದೇ ಇರುವಾಗ, ಅನೇಕ ದಿನಗಳ ಕಾಲ ಗಾಂಧೀಜಿಯವರು ಹಸಿದ ಹೊಟ್ಟೆಯಲ್ಲೇ ಬದುಕು ದೂಡಿದ್ದರು. ಇನ್ನೊಂದು ವಿಚಿತ್ರ ಅಂದ್ರೆ, ಹಲವು ಹೊಟೇಲುಗಳಲ್ಲಿ ಮಹಾತ್ಮಾ ಗಾಂಧೀಜಿಯವರಿಗೆ ಪ್ರವೇಶ ಕೂಡ ನಿರಾಕರಣೆ ಮಾಡಲಾಗಿತ್ತು.
==================================-
ಮಹಾತ್ಮಾ ಗಾಂಧೀಜಿ ಬಗ್ಗೆ ಒಂದು ಮಾತು (ಹೆಡ್)
==================================-
ಗ್ರಾಫಿಕ್ - ‘ಗಾಂಧೀಜಿಯವರು ತಮ್ಮ ಅಪೆಂಡಿಸೈಟಿಸ್ ಆಪರೇಶನ್ ಸಮಯದಲ್ಲಿ ಅರವಳಿಕೆ ಅಂದ್ರೆ ಅನಿಸ್ತೀಶಿಯವನ್ನು ತೆಗೆದುಕೊಳ್ಳದೆ, ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದರು. ಇಂತಹ ಏಕಾಗ್ರಚಿತ್ತ ಮನಸ್ತಿತಿಯ ವ್ಯಕ್ತಿ, ಇತಿಹಾಸದಲ್ಲಿ ಹಿಂದೆಂದೂ ಸಿಕ್ಕಿಲ್ಲ. ಮುಂದೆಯೂ ಇಂತಹ ವ್ಯಕ್ತಿ ಜನಿಸುತ್ತಾನೆಂದು ಊಹಿಸಲೂ ಸಾಧ್ಯವಿಲ್ಲ  - ಪರಮಹಂಸ ಯೋಗಾನಂದರು

ಗ್ರಾಫಿಕ್ - ‘ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ಮುಂದಿನ ಪೀಳಿಗೆಯ ಜನರು ನಂಬುವುದೇ ಕಷ್ಟವಾಗಬಹುದು’ -ಅಲ್ಬರ್ಟ್ ಐನ್‌ಸ್ಟಿನ್, ವಿಜ್ಞಾನಿ

ಗ್ರಾಫಿಕ್ - ಮಹಾತ್ಮಾಗಾಂಧಿಯವರ ಶಾಂತಿ ಮತ್ತು ಅಹಿಂಸೆಯನ್ನು ವಿಶ್ವಸಂಸ್ಥೆ ಕೂಡ ಅಳವಡಿಸಿಕೊಂಡಿದ್ದು, ಅಕ್ಟೋಬರ್​​ 2 ರಂದು, ಗಾಂಧೀಜಿಯವರ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ. ಆ ಮೂಲಕ ವಿಶ್ವಸಂಸ್ಥೆ ಕೂಡ ಮಹಾತ್ಮಾ ಗಾಂಧೀಜೀಯವರಿಗೆ ಗೌರವ ನೀಡಿದೆ
=========================================-==================-
ಗ್ರಾಫಿಕ್ - ‘ಜನವರಿ 30, 1948 ರಂದು, ಮಹಾತ್ಮಾ ಗಾಂಧೀಜಿಯವರನ್ನು ನಾಥೋರಾಮ್‌ ಗೋಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ್ದ. ಈ ಸುದ್ದಿಯನ್ನು ಕೇಳಿದ ವ್ಯಾಟಿಕನ್ ಸಿಟಿಯ ಪೋಪರು, ತಾವು ಒಬ್ಬ ಕ್ರೈಸ್ತ ಸಂತನನ್ನು ಕಳೆದುಕೋಡಷ್ಟೇ ದುಃಖವಾಗಿದೆ ಎಂದು ಕಣ್ಣೀರಿಟ್ಟರು
===============================================================-
ಪ್ರತಿಭಾನ್ವಿತರಾಗಿದ್ದ ಸುಭಾಷ್ ಚಂದ್ರಬೋಸ್​​ರು ಬ್ರಿಟೀಷರ ಅವಧಿಯಲ್ಲೇ IAS ಪದವಿ ಪಾಸು ಮಾಡಿದ್ದರು. ಬ್ರಿಟೀಷರ ಕೆಳಗೆ ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿ, ಆ ಕೆಲಸವನ್ನೇ ತ್ಯಜಿಸಿ ಬಂದ ಕಿಚ್ಚಿನ ಸ್ವಾಭಿಮಾನಿ ಸುಭಾಷ್ ಚಂದ್ರಬೋಸ್
======================================-
ಲಾಲ್ ಬಹದ್ದೂರ್​ ಶಾಸ್ತ್ರಿ, ಮಾಜಿ ಪ್ರಧಾನಿ
=======================================-
ಅದು ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದ ಸಮಯ.. ಒಂದು ದಿನ ಶಾಸ್ತ್ರಿಯವರ ಮಗ ತಂದೆಯ ಬಳಿಗೆ ಬಂದು ಅಪ್ಪ ನನಗೆ ಒಂದು ಬೈಕ್ ಕೊಡಿಸಿ ಅಂತ ಕೇಳಿದ್ರಂತೆ.. ಆಗ ಶಾಸ್ತ್ರಿಯವರು
ಗ್ರಾಫಿಕ್ - ‘ಮಗನೇ ಜನರು ಕೊಡುವ ಹಣದಿಂದ ನಾವು ಹೊಟ್ಟೆ ತುಂಬಿಸಿಕೊಳ್ತಾ ಇದ್ದೀವಿ.,. ಹೀಗಿರುವಾಗ ನಿನಗೆ ಬೈಕ್ ಕೊಡಿಸುವಷ್ಟು ಹಣ ನನ್ನ ಬಳಿ ಇಲ್ಲ

ವಾಯ್ಸ್:  ಎಂದು ಹೇಳಿದ್ರಂತೆ. ಆದ್ರೆ ಮಗ ಬೇಸರದಲ್ಲಿರೋದನ್ನು ಕಂಡು, ಶಾಸ್ತ್ರಿಯವರ ಪತ್ನಿ ಮಗನಿಗೆ ಬೈಕ್ ಕೊಡಿಸಿದರಂತೆ. ಇದಾದ ನಂತರ ತಮ್ಮ ಪತ್ನಿಯನ್ನು ಕರೆದು,

ಗ್ರಾಫಿಕ್ - ‘ನನ್ನ ಹತ್ತಿರ ಹಣವೇ ಇರಲಿಲ್ಲ. ಆದರೆ ಒಂದು ಬೈಕ್ ಕೊಡಿಸುವಷ್ಟು ಹಣ ನಿನ್ನಲ್ಲಿ ಹೇಗೆ ಬಂತು
ವಾಯ್ಸ್:  ಎಂದು ಕೇಳಿದ್ರಂತೆ.. ಆಗ ಶಾಸ್ತ್ರಿಯವರ ಪತ್ನಿ
ಗ್ರಾಫಿಕ್ - ‘ನೀವು ಮನೆಯ ಖರ್ಚಿಗಾಗಿ ಕೊಡುತ್ತಿದ್ದ ಹಣದಲ್ಲಿ ಸ್ವಲ್ಪ ಸ್ವಲ್ಪ ಉಳಿಸುತ್ತಿದ್ದೆ.. ಆ ಹಣದಿಂದಲೇ ಮಗನಿಗೆ ಬೈಕ್ ಕೊಡಿಸಿದೆ

ವಾಯ್ಸ್: ಎಂದು ಹೇಳಿದರು. ಮರು ದಿನವೇ ಶಾಸ್ತ್ರಿಯವರು ಸರ್ಕಾರಕ್ಕೆ ಒಂದು ಪತ್ರವನ್ನು ಬರೆದರು..
ಗ್ರಾಫಿಕ್ - ಸರ್ಕಾರ ನನಗೆ ನೀಡುತ್ತಿರುವ ಸಂಬಳ ನನ್ನ ಕುಟುಂಬದ ಖರ್ಚಿಗೆ ವಿನಿಯೋಗವಾಗಿ ಇನ್ನೂ ಹೆಚ್ಚಿಗೆ ಉಳಿಯುತ್ತಿದೆ. ದಯವಿಟ್ಟು ಆ ಹೆಚ್ಚಿನ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಿ
ವಾಯ್ಸ್: ಎಂದು ಆ ಪತ್ರದಲ್ಲಿ ತಿಳಿಸಿದ್ದರು..
====================================================-

Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved