Share This Article To your Friends

ಗೋರಿ ಮೇಲಿನ ಬರಹ.. ಕಥೆಗಾರ ಕಂಡ ಸತ್ಯ..!!


ಸಿನೆಮಾ ಪ್ರೊಡ್ಯೂಸರ್ ಒಬ್ರು ನನ್ ಹತ್ರ ಬಂದು ದೆವ್ವದ ಕಥೆ ಬರೆದು ಕೊಡಿ ಸಿನೆಮಾ ಮಾಡ್ತೀವಿ ಅಂತ ಹೇಳಿದ್ರು.. ದೆವ್ವದ ಕಥೆ ಬರಿಯೋಕೆ ಅಂತ ನಾನು ಬೆಂಗಳೂರಿನಲ್ಲಿರೋ ಸ್ಮಶಾನಕ್ಕೆ ಹೋದೆ.. ರಾತ್ರಿ ಹನ್ನೆರಡು ಮೂವತ್ತು ಆಗಿತ್ತು.. ಸ್ಮಶಾನದ ಒಳಗೆ ಬೆಳದಿಂದಳು ಬಿಟ್ರೆ, ಗೋರಿಗಳು ಮಾತ್ರ ಕಾಣ್ತಾ ಇದ್ದವು.. ನಾನು ಒಂದೊಂದ್ ಹೆಜ್ಜೆ ಇಟ್ಟಾಗಲೂ ಏನೋ ಶಬ್ಧ ಕೇಳಿಸ್ತಾ ಇತ್ತು.. ಯಾರೋ ನನ್ನ ಫಾಲೋ ಮಾಡ್ತಿದ್ದಾರೆ ಅನಿಸ್ತು.. ತಿರುಗಿ ನೋಡಿದ್ರೆ, ಯಾರೂ ಇಲ್ಲ.. ಕಾಲಿನ ಕೆಳಗೆ ನೋಡಿದೆ..!!
 
 ಮರದಿಂದ ಬಿದ್ದ ಎಲೆಗಳ ಮೆಲೆ ನಾನ್ ಕಾಲಿಟ್ಟಾಗ ಕರ್.. ಕರ್ ಅಂತ ಶಬ್ಧ ಬರ್ತಾ ಇತ್ತು.. ಸ್ವಲ್ಪ ಸಮಾಧಾನ ಆಯ್ತು.. ಧೈರ್ಯದಿಂದ ಮುಂದೆ ಹೋದೆ.. ಯಾವ್ದೋ ಕಲ್ಲಿಗೆ ಎಡವಿ ಮುಂದಿದ್ದ ಗೋರಿ ಮೇಲೆ ಬಿದ್ದೆ.. ಹಣೆಗೆ ಸ್ವಲ್ಪ ಏಟಾಗಿ ರಕ್ತ ಬರ್ತಾ ಇತ್ತು.. ತಲೆ ಎತ್ತಿ ನೋಡಿದೆ.. ಗೋರಿ ಮೇಲೆ ಬರೆದಿದ್ದ ಅಕ್ಷರ ನೋಡಿದೆ.. ಒಂದು ಕ್ಷಣ ನನ್ ಹೃದಯ ಹೊಡ್ಕೊಳ್ಳೋದೇ ನಿಂತೋಯ್ತು.. ಅದು ಬೇರೆ ಯಾರ್ದೂ ಅಲ್ಲ.. ನನ್ ಹತ್ರ ಬಂದು ದೆವ್ವದ ಕಥೆ ಬರೆದುಕೊಡಿ ಸಿನೆಮಾ ಮಾಡ್ತೀನಿ ಅಂತ ಹೇಳಿದ್ರಲ್ವಾ.. ಅದೇ ಪ್ರೊಡ್ಯೂಸರ್ ದು.. 

 ದೆವ್ವ ಇರೋದು ಕನ್ಫರ್ಮ ಆಯ್ತು.. ಎದ್ದು ಓಡೋಕ್ ಟ್ರೈ ಮಾಡ್ದೆ.. ಆದ್ರೆ ನನ್ ಕಾಲ್ನ ಯಾರೋ ಹಿಡ್ಕೊಂಡಿದ್ರು.. ಅದೇ ಟೈಮ್ ಗೆ ಕಂಬ್ಳಿ ಹೊದ್ಕೊಂಡಿದ್ದ ಒಬ್ಬ ವ್ಯಕ್ತಿ ಬಂದ.. ಹೇಯ್ ಭೂತವೇ.. ಒಳಗೆ ಹೋಗಿ ಮಲಗು.. ಚೇಷ್ಟೆ ಮಾಡಬೇಡ.. ಅಂತ ಹೇಳ್ದ.. ಅದು ನನ್ ಕಾಲ ಬಿಟ್ತು.. ಓಡು.. ಇಂಥ ಪರೀಕ್ಷೆಗಳನ್ನು ಮಾಡ್ಬೇಡ.. ನಿಂಗ್ ಹೆಂಗ್ ತೋಚುತ್ತೋ ಅಂತ ಕಥೆಗಳನ್ನು ಬರೀ.. ದೆವ್ವ ಭೂತ ಇದ್ಯೋ ಇಲ್ಲ ಅಂತ ಟೆಸ್ಟ್ ಮಾಡೋಕ್ ಬಂದ್ರೆ ದೆವ್ವಗಳಿಗೆ ಕೋಪ ಬರುತ್ತೆ.. ಓಡು.. ನಿಲ್ಬೇಡ ಓಡು ಅಂತ ಹೇಳಿದ.. ನಾನು ಅಲ್ಲಿಂದ ಹಿಂದೆ ತಿರುಗಿ೯ ನೋಡದಂತೆ ಓಡಿ ಬಂದು ಮನೇಗ್ ಸೇರಿದೆ.. ಆಮೇಲೆ ಗೊತ್ತಾಯ್ತು,., ನನ್ನನ್ನ ದೆವ್ವಗಳಿಂದ ಬಿಡಿಸಿದ್ದು ಅದೇ ಸ್ಮಶಾನವಾಸಿ ಸತ್ಯ ಹರಿಶ್ಚಂದ್ರ ಅಂತ.. ಹೌದು.. ಹರಿಶ್ಚಂದ್ರ ಈಗ್ಲೂ ಕೂಡ ಸ್ಮಶಾನ ಕಾಯ್ತಾ ಇದ್ದಾನೆ.. ದೆವ್ವಗಳಿಂದ ಜನರಿಗೆ ತೊಂದರೆ ಅಗ್ದೇ ಇರೋ ಹಾಗೆ ಕಾಯ್ತಾ ಇದ್ದಾನೆ..
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved