ಅಯೋಧ್ಯೆಯ ರಾಜನಾದ ದಶರಥ ಮತ್ತು ಸುಮಿತ್ರೆಯ ಮಗನಾಗಿ ಲಕ್ಷ್ಮಣ ಜನಿಸುತ್ತಾನೆ.. ಶತ್ರುಘ್ನ ಮತ್ತು ಲಕ್ಷ್ಮಣ ಇಬ್ಬರೂ ಅವಳಿಗಳು. ಆದರೆ ದಶರಥನ ಹಿರಿಯ ಪತ್ನಿಯಾದ ಕೌಸಲಾದೇವಿಯ ಮಗ ಶ್ರೀರಾಮಚಂದ್ರ ಹಾಗೂ ಲಕ್ಷ್ಮಣರು ಸದಾ ಜೊತೆಯಲ್ಲಿ ಇರುತ್ತಿದ್ದರು.
ವಿಶ್ವಾಮಿತ್ರರೊಂದಿಗೆ ಕಾಡಿಗೆ ಹೋಗಿ ಮಾರಿಚ ಮತ್ತು ಸುಬಾಹುರಂಥ ರಕ್ಕಸರನ್ನು ಸಂಹರಿಸುವಾಗಲೂ ರಾಮ ಲಕ್ಷ್ಮಣರು ಜೊತೆಯಲ್ಲಿದ್ದರು.
ರಾಮ ವನವಾಸಕ್ಕೆಂದು ಹೊರಟಾಗ ಲಕ್ಷ್ಮಣ ನೂ ಅವನನ್ನು ಹಿಂಬಾಲಿಸುತ್ತಾನೆ. ಕಾಡಿನಲ್ಲಿದ್ದಷ್ಟೂ ದಿನ ತನ್ನ ಅಣ್ಣ, ಅತ್ತಿಗೆಯರಾದ ರಾಮ ಮತ್ತು ಸೀತೆಯ ಸೇವೆ ಮಾಡುತ್ತಿರುತ್ತಾನೆ. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋದಾಗ, ರಾವಣನೊಡನೆ ಯುದ್ಧ ಮಾಡಿ, ಸಂಹರಿಸಿ ಸೀತಾಮಾತೆಯನ್ನು ಬಿಡಿಸಿಕೊಂಡು ಬರುವಲ್ಲಿ ಲಕ್ಷ್ಮಣ ಜಯಶೀಲನಾಗುತ್ತಾನೆ. ಲಕ್ಷ್ನಣನು ಊರ್ಮಿಳೆ ಎಂಬ ಕನ್ಯೆಯನ್ನು ವರಿಸುತ್ತಾನೆ