Share This Article To your Friends

ಪುತ್ತೂರಿನ ಆ ಭಯಾನಕ ತೋಟ

ಪುತ್ತೂರಿನಿಂದ ವಿಟ್ಲಕ್ಕೆ ಹೋಗುವ ಹಾದಿಯಲ್ಲಿ ರಾಮಚಂದ್ರೇ ಗೌಡರ ತೋಟ ಇತ್ತು.. ಆ ತೋಟದ ಮನೆಯಲ್ಲಿ ರಾತ್ರೋ ರಾತ್ರಿ ಪಾತ್ರೆಗಳು ಹಾರಾಡ್ತವೆ.. ಹೆಂಚಿನ ಮೇಲೆ ಕಲ್ಲು ಬೀಳ್ತವೆ.  ಆ ತೋಟದಲ್ಲಿ ಕೆಲಸ ಮಾಡೋ ಒಬ್ಬ ವ್ಯಕ್ತಿ ಸತ್ತು ದೆವ್ವ ಆಗಿದ್ದಾನೆ..  ಆ ತೋಟದಲ್ಲಿ ದೆವ್ವವಿದೆ ಎಂಬ ಸುದ್ದಿ ಎಲ್ಲಾ ಕಡೆ ಹಬ್ಬಿತ್ತು.. ಆವತ್ತು ದೆವ್ವವನ್ನು ನೋಡಬೇಕು ಅಂತ ತಿಳಿದು ನನು ಮತ್ತು ನನ್ನ ಫ್ರೆಂಡು ಆ ತೋಟದಲ್ಲಿ ರಾತ್ರಿ ಅವಿತು ಕೂತುಕೊಂಡ್ವಿ.

ಅದು ನಿಜಕ್ಕೂ ಅದ್ಭುತವಾದ ಅರಮನೆ. ಮಧ್ಯ ರಾತ್ರಿ ಸುಮಾರಿಗೆ ಒಂದು ಸುಂದರವಾದ ರಾಣಿ ಆ ಅಂತಃಪುರಕ್ಕೆ ಬರ್ತಾಳೆ.. ಅಲ್ಲಿಂದ ಸ್ನಾನಗೃಹ ಕ್ಕೆ ಹೋಗ್ತಾಳೆ.. ಸ್ನಾನ ಮುಗಿಸಿ ಬಂದ ನಂತರ ಅಡುಗೆ ಮನೆಗೆ ಹೋಗ್ತಾಳೆ.. ಅಲ್ಲಿ ಊಟ ಇರೋದಿಲ್ಲ... ಕೋಪ ಬರುತ್ತೆ ಆ ರಾಣಿ ದೆವ್ವಾ ಗೆ.. ಕೋಪದಲ್ಲಿ ಅಲ್ಲಿದ್ದ ಪಾತ್ರೆಗಳನ್ನೆಲ್ಲಾ ಬಿಸಾಕ್ತಾಳೆ.. ಆಗ ನಮಗೆ ಗೊತ್ತಾಯ್ತು.. ಪ್ರತಿ ದಿನ ಪಾತ್ರೆಗಳ ಸದ್ದು  ಯಾಕೆ ಕೇಳಿಸುತ್ತೆ ಅಂತ.. ಆಮೇಲೆ ಆ ರಾಣಿ ದೆವ್ವ ಹೊರಗೆ ತೋಟದಲ್ಲಿ ಬಂತು.. ತೋಟದ ಸುತ್ತ ಓಡಾಡಿ ಮಾವಿನ ಮರದಲ್ಲಿನ ಮಾವಿನ ಹಣ್ಣನ್ನು ತಿಂತಾ ಇತ್ತು.,. ಅದರ ಬೀಜವನ್ನು ತಗೊಂಡು ಹೆಂಚಿನ ಮೇಲೆ ಬಿಸಾಕ್ತಾ ಇತ್ತು.. ಇದ್ರಿಂದಾನೇ ಪ್ರತಿ ದಿನ ಹೆಂಚಿನ ಮನೆಗಳ ಮೇಲೆ ಕಲ್ಲು ಬಿಸಾಕಿದಂಥ ಅನುಭವ ಆಗ್ತಾ ಇತ್ತು.. ಅಷ್ಟೋತ್ತಿಗಾಗ್ಲೇ 3 ಗಂಟೆ ಆಗಿತ್ತು.. ನೋಡ್ತಾ ಇದ್ದಂಗೆ ಆ ದೆವ್ವ ಇದ್ದಕ್ಕಿದ್ದಂತೆ ಮಾಯವಾಗಿ ಹೋಯ್ತು..  ನಾನು ಮತ್ತು ನನ್ ಫ್ರೆಂಡು ಇಬ್ರೂ ಮನೆಗೆ  ಬಂದ್ವಿ.. ಮಾರನೆಯ ದಿನ ರಾತ್ರಿ ನಮ್ ಮನೆ ಮೇಲೆ ಕಲ್ಲುಗಳು ಬಿದ್ದಂಥ ಅನುಭವ ಆಯ್ತು. ಬೆಳಿಗ್ಗೆ ಎದ್ದು ನೋಡಿದ್ರೆ ದೆವ್ವದ ಸಂಶೋಧನೆಗೆ ನನ್ ಜೊತೆ ಬಂದಿದ್ದ ನನ್ ಫ್ರೆಂಡ್ ಹೆಣ ಮನೇ ಮೇಲೆ  ಬಿದ್ದಿತ್ತು
Share this article :

TV9 Kannada Live

News18 Kannada Live

Suvarna News Live

ಇತ್ತೀಚೆಗೆ ಹುಡುಕಿದ್ದು

 
Support : Copyright © 2011. A FOX TV - KANNADA - All Rights Reserved